ಓ ಚೆಲುವೆ,
ಓ ಚೆಲುವೆ,
ನನಗೆ ಗೊತ್ತು ನೀ ನನ್ನ ಪ್ರೀತಿಸುವೆ ಎಂದು
ನೀ ಅದನ ಅರಿತು ಒಪ್ಪಿಕೊಳ್ಳುವಂದು
ಪುನರ್ಜನ್ಮ ಪಡೆಯುವೆ ನಾನಂದು.
ದೂರವಿಟ್ಟವನು
ಜೀವನದಲ್ಲಿ ನೀ ಪಡೆಯುವೆ ಎಷ್ಟೋ ಜನರ ಒಡನಾಟವನ್ನು
ಎಲ್ಲರೂ ಬಯಸಿದಂತೆ ಬಾಳಿದರೆ ನೀ ಒಳ್ಳೆಯವನು,
ಇಲ್ಲವಾದರೆ ಕೆಟ್ಟವನು,
ಅವರ ಬಯಕೆ ತಪ್ಪೆಂದರೆ ನೀ ಅವರ ಜೀವನದಿಂ ದೂರವಿಟ್ಟವನು.
ಸಾಕು ನಿಲ್ಲಿಸೋ ಮಂಕುತಿಮ್ಮ
ಇತ್ತೀಚೆಗ ಅರ್ಥವಿಲ್ಲದ ಪ್ರಾಸಗಳ ಬರೆದು ಹಾಡುತಿದ್ದಾನೆ ನನ್ನ ತಮ್ಮ
ಅವನ ಈ ಹುಚ್ಚಾಟವ ತಾಳದೆ ಮಾತುಬಿಟ್ಟಿದ್ದಾರೆ ನಮ್ಮಮ್ಮ
ಮುಂದೇನಾಗುತ್ತೋ ಬಲ್ಲವನ್ನೋಬನೇ, ಆ ಬ್ರಮ್ಮ…..
ಕಡೆಗೂ ಕಾಟ ತಡೆಯಲಾರದೆ ನಾ ಅವನಿಗೆ ಹೇಳಿದೆ “ಲೋ ತಮ್ಮ.. ಈ ಹುಚ್ಚಾಟ ಸಾಕು ನಿಲ್ಲಿಸೋ ಮಂಕುತಿಮ್ಮ”
FANTASTIC… I am shayari addict you can say and i loved it.. That too Kannada shayari… I have been following your writings from a quite some time now… Hoping to hear a lot more from you….
Cheers,
Bhanu
Hi Bhanu,
Thanks a lot for your comment.